ನನ್ನ ಶಾಲೆಯು 1958 ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಾಗಿ ಪ್ರಾರಂಭವಾಗಿ 38 ವರ್ಷಗಳ ಕಾಲ ಕಿರಿಯ ಪ್ರಾಥಮಿಕ ಶಾಲೆಯಾಗಿ 1996-97 ನೇ ಸಾಲಿನಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಉನ್ನತಿಕರಿಸಲಾಯಿತ್ತು. ಇಂತಹ ಶಾಲೆಗೆ ನಾನು ಸ.ಹಿ.ಪ್ರಾ.ಶಾಲೆ ಹನ್ಯಾಳುಯಿಂದ ಇಲಾಖಾ ನಿಯಮದಂತೆ ವರ್ಗಾವಣೆ ಹೊಂದಿ ದಿನಾಂಕ 29-08-2016 ರಂದು ಈ ಶಾಲೆಗೆ ಮುಖ್ಯ ಶಿಕ್ಷಕನಾಗಿ ಸೇವೆ ಪ್ರಾರಂಭಿಸಿದೆ. ನಾನು ಬಂದಾಗ ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕುಂಠಿತಗೊಂಡಿತ್ತು ಪೋಷಕರು ಖಾಸಗಿ ಶಾಲೆಯ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುತ್ತಿದ್ದರು ಅಂದಿನ ಈ ಶಾಲೆಯಲ್ಲಿ 32 ಮಕ್ಕಳ ವ್ಯಾಸಂಗ ಮಾಡುತ್ತಿದ್ದರು. ಹಾಗೂ ಹಿರಿಯ ಪ್ರಾಥಮಿಕ ಶಾಲೆಯಿಂದ ಕಿರಿಯ ಪ್ರಾಥಮಿಕ ಶಾಲೆಗೆ ಹಿಂಬಡ್ತಿ ಆಗುವುದರಲ್ಲಿತ್ತು ನಾನು ಗ್ರಾಮಸ್ಥರು ಹಾಗೂ SDMC ಮತ್ತು ಊರಿನ ಯಾಜಮಾನರ ಸಹಕಾರದೊಂದಿಗೆ ಮನೆ ಮನೆ ಭೇಟಿ ನೀಡಿ ಪೋಷಕರ ಮನವೊಲಿಸಿ 2016-17ನೇ ಸಾಲಿನಲ್ಲಿ 22 ಮಕ್ಕಳ ವರ್ಗಾವಣೆ ಪತ್ರವನ್ನು ನನ್ನ ಜವಾಬ್ದಾರಿಯ ಮೇರೆಗೆ ಪಾಲಕರು ಮೂಲಕ ಶಾಲೆಗೆ ದಾಖಲಾತಿ ಮಾಡಿಕೊಳ್ಳಲಾಯಿತು. ನಂತರ 2017-18 ನೇ ಸಾಲಿನಲ್ಲಿ 45 ಮಕ್ಕಳು ವ್ಯಾಸಂಗಮಾಡಿದರು 2018-19 ನೇ ಸಾಲಿನಲ್ಲಿ 52 ಮಕ್ಕಳು ವ್ಯಾಸಂಗ ಮಾಡಿದರು. 2019 - 20 ನೇ ಸಾಲಿನಲ್ಲಿ 58 ಮಕ್ಕಳು ವ್ಯಾಸಂಗಮಾಡಿದ್ದರು ಒಟ್ಟಾರೆಯಾಗಿ ನಮ್ಮ ಗ್ರಾಮದಲ್ಲಿ SDMC ಅಧ್ಯಕ್ಷರಾದ ಶ್ರೀ ದೇವರಾಜು ಮತ್ತು ಸದಸ್ಯರು & ಗ್ರಾಮದ ಮುಖಂಡರ ಸಹಕಾರದೊಂದಿಗೆ ಖಾಸಗಿ ಶಾಲೆಗೆ ಹೋಗುವ ಮಕ್ಕಳ ಸಂಖ್ಯೆ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಈ ರೀತಿಯಾಗಿದ ಜೆ ಹೊಸಹಳ್ಳಿ (ಜನ್ನೇಗೌಡನ ಹೊಸಹಳ್ಳಿ) ಹಾರಂಗಿ ನಾಲಾ ಹಂತದ ಕೆಳ ಭಾಗದಲ್ಲಿರುವುದರಿಂದ ಗ್ರಾಮಕ್ಕೆ ನೀರು ಹರಿದು ಇಡೀ ಗ್ರಾಮವು ಶೀತ ಪ್ರದೇಶ ವಾಗಿರುವುದನ್ನು ಕಂಡು ಗ್ರಾಮಸ್ಥರು ಹಾಗೂ ಊರಿನ ಮುಖಂಡರು ಶ್ರೀ ನಂಜೇಗೌಡರು (ಮಾಜಿ ನೀರಾವರಿ ಸಚಿವರು) ಇವರನ್ನು ಭೇಟಿಯಾಗಿ ನಮ್ಮ ಗ್ರಾಮವನ್ನು ಬೇರೆಡೆಗೆ ಸ್ಥಳಾಂತರ ಮಾಡಿಕೊಡವಂತೆ ಮನವಿ ಮಾಡಲಾಯಿತು ಇದಕ್ಕೆ ಶ್ರೀ ನಂಜೇಗೌಡ ಅವರ ಸತತ ಪರಿಶ್ರಮದಿಂದ ಗ್ರಾಮ ಹಾಗೂ ಶಾಲೆಯನ್ನು ಶೀತ ಪ್ರದೇಶ ಮುಕ್ತಗೊಳಿಸಲು ಜೆ ಹೊಸಹಳ್ಳಿ ಬೋರೆಗೆ ಸ್ಥಳಾಂತರಿಸಲಾಯಿತು. ದಿನಾಂಕ 10-10-2017 ರಂದು ಶ್ರೀ ಎ ಮಂಜು ಸಚಿವರು (ಪಶುಸಂಗೋಪನೆ ಮತ್ತು ರೇಷ್ಮೆ ಇಲಾಖೆ) ಇವರಿಂದ ನೂತನ ಶಾಲೆಗೆ ಶಂಕುಸ್ಥಾಪನೆಯಾಗಿತ್ತು. ಇದರಲ್ಲಿ ಐದು ಕೊಠಡಿಗಳು, ಅಕ್ಷರದಾಸೋಹ ಕೊಠಡಿ ಭೋಜನಾಲಯ ಬಯಲು ರಂಗಮಂದಿರ ಕುಡಿಯುವ ನೀರು ಸೈಕಲ್ ನಿಲ್ದಾಣ ಶಾಲೆಯ ಸುತ್ತಲು ಕಾಂಪೌಂಡ್ ಹಾಗೂ ಗೇಟ್ ಅನ್ನು ಒಳಗೊಂಡಂತೆ ಸಂಪೂರ್ಣವಾಗಿ ಕಾಮಗಾರಿ ಮುಗಿದು ದಿನಾಂಕ 07-03-2020 ರಂದು ಶ್ರೀ ಎ ಟಿ ರಾಮಸ್ವಾಮಿ ಅವರು ಶಾಸಕರು ಅರಕಲಗೂಡು ಹಾಗೂ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಉದ್ಘಾಟನೆಗೊಂಡಿತು. ಶಾಲೆಗೆ ಸುಂದರ ಉದ್ಯಾನವನ ನಿರ್ಮಿಸಿ (₹1.25.000) ಮಹಾಪುರುಷರ ನುಡಿಮುತ್ತುಗಳ ಫಲಕಗಳನ್ನು ಅಳವಡಿಸಿ ಶಾರದ ವಿಗ್ರಹ ಪ್ರತಿಷ್ಠಾಪನೆ ಬೋಜನಾಲಯಕ್ಕೆ ಹೈಟೆಕ್ ಗ್ಲಾಸ್ ಜೋಡಣೆ ಹೈಟೆಕ್ ವಾಟರ್ ಫಿಲ್ಟರ್ ಹಾಗೂ ಶಾಲೆಯ ಎಲ್ಲಾ ಕೊಠಡಿಗಳಿಗೆ ಸುಮಾರು 60 ಸಾವಿರ ವೆಚ್ಚದಲ್ಲಿ 12 ಸಿಸಿ ಕ್ಯಾಮೆರಾ ಇವೆಲ್ಲ ಸಹಕಾರವನ್ನು ಮುಖ್ಯ ಶಿಕ್ಷಕರು & ಸಹಶಿಕ್ಷಕರ ಒತ್ತಾಯದ ಮೇರೆಗೆ ಹಾರಂಗಿ ನೀರಾವರಿ ನಿಗಮದ ಶ್ರೀ ತಿಮ್ಮಪ್ಪ ಇವರ ತನು-ಮನ-ಧನ ನಿಸ್ವಾರ್ಥ ಸೇವೆಯಿಂದ ಹಾಗೂ ಅವರ ಸಹಪಾಠಿಗಳಿಂದ ಅವರ ಸ್ನೇಹಿತರ ಮನವೊಲಿಸಿ ನಮ್ಮ ಶಾಲೆಗೆ ಸುಮಾರು 2 ರಿಂದ 3 ಲಕ್ಷದವರೆಗೆ ದೇಣಿಗೆಯನ್ನು ನೀಡಿರುತ್ತಾರೆ ಇಂತಹ ಅತ್ಯುತ್ತಮ ಶಾಲೆಗೆ ಅತ್ಯವಶ್ಯಕವಾಗಿ ಗಣಕಯಂತ್ರ ಪೀಠೋಪಕರಣಗಳು ಬೀರುಗಳು ಪಾಠೋಪಕರಣಗಳ ಅವಶ್ಯಕತೆಯಿದ್ದು ಮಕ್ಕಳ ಕಲಿಕೆಗೆ ಅನುಕೂಲಕ್ಕಾಗಿ ಇಲಾಖೆಯಿಂದ ಹಾಗೂ ಶಿಕ್ಷಣಾಸ್ತರಿಂದ ಅನುದಾನ ಪಡೆಯಲು ಅವಶ್ಯವಾಗಿರುತ್ತದೆ. ಈ ಶಾಲೆಗೆ ಆಧುನಿಕ ಸ್ಪರ್ಶ ನೀಡಲು ನಮ್ಮ ಶಾಲೆಯ ಶಿಕ್ಷಕರಾದವರು ಪ್ರಕಾಶ್ ಸಿ ಎನ್ ಅವರು ಹೊಸದಾಗಿ app & ಬ್ಲಾಗ್ ಕ್ರಿಯೇಟ್ ಮಾಡಿ ಶಾಲೆಯ ಎಲ್ಲಾ ವಿಷಯಗಳನ್ನು ಸಮುದಾಯ ಮತ್ತು ಇಲಾಖೆಗೆ ಮಾಹಿತಿ ಬಿತ್ತರಿಸಲು ಅನುಕೂಲವಾಗುವಂತೆ ಇರುವುದು ತುಂಬಾ ಸಂತೋಷವಾಗಿದೆ ಈ ಶಾಲೆಯ ಮುಖ್ಯ ಶಿಕ್ಷಕನಾದ ನಾನು ಇವರ ಈ ಕಾರ್ಯಕ್ಕೆ ಪ್ರೋತ್ಸಾಹಿಸಿ ಶುಭ ಹಾರೈಸುತ್ತಾ ನಿಮ್ಮ ಸೇವೆ ನಮ್ಮ ಶಾಲೆಗೆ ಹೀಗೆ ಮುಂದುವರೆದು ಉನ್ನತ ಹಂತವನ್ನು ತಲುಪಲಿ ಎಂದು ಆಶಿಸುತ್ತಾ ನಿಮ್ಮ ಬ್ಲಾಕ್ ಉತ್ತಮವಾಗಿ ಮೂಡಿ ಬರಲಿ ಎಂದು ಶುಭ ಹಾರೈಸುತ್ತೇನೆ.
ಇಂತಿ
ಶ್ರೀ ಕಾಳಬೋಯಿ (ಮು.ಶಿ)
ಸ.ಹಿ.ಪ್ರಾ.ಶಾ.ಜೆ ಹೊಸಹಳ್ಳಿ
ಶಾಲೆಗೆ ಬೇಕಾದ ಅಗತ್ಯ ಮಾಹಿತಿಯನ್ನು ಮಾತ್ರ ಹಾಕಿರುವುದು
ಪ್ರತ್ಯುತ್ತರಅಳಿಸಿBlogg ವೀಕ್ಷಣೆಗೆ ಸರಳ ಮತ್ತು ಉತ್ತಮವಾಗಿದೆ.